![CM MEETING: ಬಜೆಟ್ ಘೋಷಣೆ ಅನುಷ್ಠಾನ – ಆಡಳಿತ ಶೈಲಿ ಬದಲಿಸಿ: ಸಿಎಂ ವಾರ್ನಿಂಗ್ CM MEETING: ಬಜೆಟ್ ಘೋಷಣೆ ಅನುಷ್ಠಾನ – ಆಡಳಿತ ಶೈಲಿ ಬದಲಿಸಿ: ಸಿಎಂ ವಾರ್ನಿಂಗ್](https://blogger.googleusercontent.com/img/b/R29vZ2xl/AVvXsEjkMVd0s90KYJ68j6TdBG_KzsJbH7vwET26dn9g_iTcertfrMTrdH9K13CzmH7NH56771XQ3Uaketwl4LMm8bB8zpYn9NJ07gJgp1WaA1YsMXA9m4sitUTjE9j53vzMMKbO62tAM604bkquMX3bK3Rm01wNrzCyQEQBHULsh8WYQuzsegAqdxcRMg50/s320/BOMMAYEE.jpg)
CM MEETING: ಬಜೆಟ್ ಘೋಷಣೆ ಅನುಷ್ಠಾನ – ಆಡಳಿತ ಶೈಲಿ ಬದಲಿಸಿ: ಸಿಎಂ ವಾರ್ನಿಂಗ್
Sunday, May 8, 2022
ಕರ್ನಾಟಕದಲ್ಲಿ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಡಳಿತ ಶೈಲಿಯನ್ನು ಬದಲಾಯಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ದಾರೆ.
ಭಾನುವಾರ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ, ರಾಜ್ಯದ ಆಡಳಿತ ಶೈಲಿಯಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು. ಬಡವರಿಗೆ ಸಹಾಯ ಮಾಡಲು ಏನೇ ನಿರ್ಧಾರ ತೆಗೆದುಕೊಂಡರೂ ಸರ್ಕಾರ ನಿಮ್ಮ ರಕ್ಷಣೆಗೆ ನಿಲ್ಲುತ್ತದೆ. ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿದರೆ ಹೊಸ ಚೈತನ್ಯ ಮೂಡುತ್ತದೆ. ಅದರಿಂದ ನಿಮಗೂ ತೃಪ್ತಿ ದೊರೆಯುವುದು ಎಂದರು.