NEWS: ವೋಕಲ್ ಫಾರ್ ಲೋಕಲ್: ಕರಾವಳಿ ಉತ್ಸವದಲ್ಲಿ ವ್ಯಾಪಾರಸ್ಥರನ್ನು ಹುರಿದುಂಬಿಸಿದ ಸಂಸದ ಕ್ಯಾ. ಚೌಟ
Wednesday, January 15, 2025
ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರಾವಳಿಯ ಉತ್ಸವಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿದ ಸಂದರ್ಭ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ನವ ಭಾರತದ ಧ್ಯೇಯ 'ವೋಕಲ್ ಫಾರ್ ಲೋಕಲ್ ' ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಲ್ಲಿ ಇಲ್ಲಿನ ವಸ್ತುಪ್ರದರ್ಶನ ಮಳಿಗೆಗಳಿಗೆ ತೆರಳಿದರು.
ಕರಾವಳಿಯ ವೈವಿಧ್ಯತೆಗಳನ್ನು ಪ್ರತಿಬಿಂಬಿಸುವ ಸ್ವ ಉದ್ದಿಮೆ, ಗುಡಿಕೈಗಾರಿಕೆ ಹಾಗೂ ಇತರ ವ್ಯಾಪಾರಸ್ಥರಿಗೆ ಪ್ರೋತ್ಸಾಹಕ ಮಾತುಗಳನ್ನಾಡಿದರು.
ಈ ವೇಳೆ ಕರಕುಶಕರ್ಮಿ, ಸ್ವ ಉದ್ಯಮಿ, ವ್ಯಾಪಾರಸ್ಥರ ಸಬಲೀಕರಣಗೊಳಿಸುವ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆಯು ಅರಿವು ಮೂಡಿಸಿದರು.