![ELECTION: ಯಡಿಯೂರಪ್ಪ ಪುತ್ರ ವಿಜಯೇಂದ್ರಗಿಲ್ಲ ಪರಿಷತ್ ಟಿಕೆಟ್: ಬಿಜೆಪಿ ಪಟ್ಟಿ ಪ್ರಕಟ ELECTION: ಯಡಿಯೂರಪ್ಪ ಪುತ್ರ ವಿಜಯೇಂದ್ರಗಿಲ್ಲ ಪರಿಷತ್ ಟಿಕೆಟ್: ಬಿಜೆಪಿ ಪಟ್ಟಿ ಪ್ರಕಟ](https://blogger.googleusercontent.com/img/b/R29vZ2xl/AVvXsEj9r1N60qMspUS0xc1jFsd0YGrGGO7sbQMtvBETh1TXM4AAnQxAITaQYiaMDN-hPgiyZfB4aQHekvOlOkEqNyTG63WXO8dvh3LwGWOiBtRIn1Iyv1qUd96ojNzO3hvccf8zLFv4PQuyANxViWI75KLig5_kxQOgX_8xvrSCFasCdbE63FA2CeWwIrI2/s1600/%E0%B2%B5%E0%B2%BF%E0%B2%9C%E0%B3%87%E0%B2%82%E0%B2%A6%E0%B3%8D%E0%B2%B0.jpg)
ELECTION: ಯಡಿಯೂರಪ್ಪ ಪುತ್ರ ವಿಜಯೇಂದ್ರಗಿಲ್ಲ ಪರಿಷತ್ ಟಿಕೆಟ್: ಬಿಜೆಪಿ ಪಟ್ಟಿ ಪ್ರಕಟ
Tuesday, May 24, 2022
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಲಿಂಗಾಯತರ ಕೋಟದಡಿಯಲ್ಲಿ ಟಿಕೆಟ್ ದೊರಕಿದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ದೊರಕಿಲ್ಲ.
ಮಹಿಳಾ ಕೋಟದಡಿಯಲ್ಲಿ ಕೊಪ್ಪಳ ಮೂಲದ ಲಂಬಾಣಿ ಸಮುದಾಯದ ಹೇಮಲತಾ ನಾಯಕ್, ಹಿಂದುಳಿದ ವರ್ಗ ಕೋಟಾದಲ್ಲಿ ಪಕ್ಷದ ಕಚೇರಿ ಕಾರ್ಯದರ್ಶಿಯಾಗಿದ್ದ ಕೇಶವ ಪ್ರಸಾದ್, ದಲಿತರ ಕೋಟದಲ್ಲಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದ್ದರೆ, ವಿಧಾನ ಪರಿಷತ್ನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ್ ಹೊರಟ್ಟಿಗೆ ಟಿಕೆಟ್ ನೀಡಲಾಗಿದೆ.