![NEWS: ಕಾನೂನಿನ ಮುಂದೆ ಯಾರೂ ಮೇಲಲ್ಲ, ರಾಹುಲ್ ಸೇರಿದಂತೆ : ಸ್ಮೃತಿ ಇರಾನಿ NEWS: ಕಾನೂನಿನ ಮುಂದೆ ಯಾರೂ ಮೇಲಲ್ಲ, ರಾಹುಲ್ ಸೇರಿದಂತೆ : ಸ್ಮೃತಿ ಇರಾನಿ](https://blogger.googleusercontent.com/img/b/R29vZ2xl/AVvXsEhJDQ01DV_0RUrZeaqD7lo6dopW4TlQSkdmFx4IRTTL7KfzfTSkb-VIvUpl11rdNevPlPsed9rjGx2NqZjl7VozvbV2aVpA_PO5I9_pOpa_KGXkkkeq-nxWekTbcUmYg-oMDdmuHsOYPpMFmpQovwxQaKqP1L_N4TvnkOOHYsErDEVhzf8wU-lU9oxt/w640-h426/SMRITHI%20IRANI.jpg)
NEWS: ಕಾನೂನಿನ ಮುಂದೆ ಯಾರೂ ಮೇಲಲ್ಲ, ರಾಹುಲ್ ಸೇರಿದಂತೆ : ಸ್ಮೃತಿ ಇರಾನಿ
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ನೋಟಿಸ್ ಕೊಟ್ಟಿದ್ದಕ್ಕೆ ಕಾಂಗ್ರೆಸ್ ದೇಶದ ಹಲವೆಡೆ ಪ್ರತಿಭಟನೆ ನಡೆಸಿದ್ದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವುದು ಪ್ರಜಾಪ್ರಭುತ್ವವನ್ನು
ಉಳಿಸಲು ಅಲ್ಲ, ಆದರೆ ರಾಹುಲ್ ಗಾಂಧಿ ಅವರ 2,000 ಕೋಟಿ ಮೌಲ್ಯದ ಆಸ್ತಿಯನ್ನು ಉಳಿಸಲು ಎಂದು ಸ್ಮೃತಿ
ಇರಾನಿ ಆರೋಪಿಸಿದರು.NOBODY IS ABOVE THE LAW. NOT EVEN RAHUL GANDHI.. ಎಂದರು.
ರಾಹುಲ್ ಗಾಂಧಿ ಅಥವಾ ಈ ಕುಟುಂಬದ ಸಂಬಂಧ ಕಂಪನಿಯೊಂದರ
ಜೊತೆ ಇದೆಯೇ ಎಂದು ಅವರು ಪ್ರಶ್ನಿಸಿದ್ದು, ಅದರೊಂದಿಗೆ ವ್ಯವಹಾರ ಇರುವುದು ನಿಜವೇ ಎಂದು
ಪ್ರಶ್ನಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ನಾಯಕ ರಾಹುಲ್ ಅನ್ನು
ಪ್ರಶ್ನಿಸಬೇಕು ಎಂದಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಸತ್ಯದ ಹೋರಾಟ ಮುಂದುವರಿಯಲಿದೆ ಎಂದು ಕಾಂಗ್ರೆಸ್ ನಾಯಕ ಸುರ್ಜೇವಾಲಾ ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರು ಕೂಡ ಕಾಂಗ್ರೆಸ್ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ, ಹಾಗಾದರೆ ಈಗಿನ ಆಡಳಿತ ಸರ್ಕಾರ ನಮ್ಮ ಧ್ವನಿಯನ್ನು ಹೇಗೆ ಹತ್ತಿಕ್ಕುತ್ತದೆ. ಮೋದಿ ಸರಕಾರವನ್ನು ಹೇಡಿತನ ಎಂದು ಕರೆದಿದ್ದಾರೆ.