![CRIME: ಉಡುಪಿ: ಪಾಂಗಾಳ ಎಂಬಲ್ಲಿ ಚೂರಿಯಿಂದ ಇರಿದು ಕೊಲೆ CRIME: ಉಡುಪಿ: ಪಾಂಗಾಳ ಎಂಬಲ್ಲಿ ಚೂರಿಯಿಂದ ಇರಿದು ಕೊಲೆ](https://blogger.googleusercontent.com/img/b/R29vZ2xl/AVvXsEggNhXkWlbRfYGoK5heNx-wuLXAHVNR81O4AQLDU960NXuZ6kVxU6xyLV7xC9x62N1b9lJgc2kd4-8YlmU8wbvVZzMdwMSnJPy_EevXypv5ZtEU2-vqYO3glJXFodRwW4tzxkAyxgVfgPuOp-4nmGHxCuTTuFfmDdcHZISc8YuR5JkfUCRUKAVXAxiC/s320/CRIME%20-%20MURDER.jpg)
CRIME: ಉಡುಪಿ: ಪಾಂಗಾಳ ಎಂಬಲ್ಲಿ ಚೂರಿಯಿಂದ ಇರಿದು ಕೊಲೆ
Sunday, February 5, 2023
ಉಡುಪಿ: ಕರಾವಳಿಯ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾಂಗಾಳದಲ್ಲಿ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳಿಬ್ಬರು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಪಾಂಗಾಳ ಮುಂಡೇಡಿ ನಿವಾಸಿ ಶರತ್ ಶೆಟ್ಟಿ (39) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಾಳ ಎಂಬಲ್ಲಿ ಘಟನೆ ನಡೆದಿದ್ದು, ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆಗೈದಿದ್ದಾರೆ ಎನ್ನಲಾಗಿದೆ.ಗಾಯಾಳು ಶರತ್ ಶೆಟ್ಟಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.