ALERT: ಮುಂದಿನ ನಾಲ್ಕು ದಿನ ಕಡಲತೀರವಾಸಿಗಳಿಗೆ ಅಲರ್ಟ್ ಮೆಸೇಜ್ ನೀಡಿದ ಹವಾಮಾನ ಇಲಾಖೆ

ALERT: ಮುಂದಿನ ನಾಲ್ಕು ದಿನ ಕಡಲತೀರವಾಸಿಗಳಿಗೆ ಅಲರ್ಟ್ ಮೆಸೇಜ್ ನೀಡಿದ ಹವಾಮಾನ ಇಲಾಖೆ


 


ದಕ್ಷಿಣ ಕನ್ನಡ ಸಹಿತ ಕರ್ನಾಟಕದ ಕರಾವಳಿ ತೀರದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಚಂಡಮಾರುತ ಭೀತಿ ಇದೆ. ಇದರಿಂದ ವಾಯುಭಾರ ಕುಸಿತ ಉಂಟಾಗಿ ಅರಬ್ಬೀ ಸಮುದ್ರದಲ್ಲಿ ತೆರೆಗಳು ನೆಲಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ಕಡಲತೀರವಾಸಿಗಳಿಗೆ, ಪ್ರವಾಸಿಗರಿಗೆ, ಸಮುದ್ರ ವಿಹಾರಕ್ಕೆ ಬರುವವರಿಗೆ, ದೋಣಿಯಾನ ಮಾಡುವವರಿಗೆ, ಸಮುದ್ರದಲ್ಲಿ ಮೀನು ಹಿಡಿಯಲು ಹೋಗುವವರಿಗೆ ಕನಿಷ್ಠ ಈ ನಾಲ್ಕು ದಿನಗಳ ಕಾಲವಂತೂ ಕಡಲಿಗಿಳಿಯುವುದು ಬೇಡ ಎಂದು ಇಲಾಖೆ ಎಚ್ಚರಿಸಿದೆ.

ಜೂನ್ 6ರಂದು 55 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದರೆ, 7ರಿಂದ 9ರವರೆಗೆ ಗಂಟೆಗೆ 65 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಆದಾಗ್ಯೂ ಇದು ಮುನ್ಸೂಚನೆ ಮಾತ್ರವಾಗಿದ್ದು, ಬದಲಾವಣೆ ಇದ್ದೇ ಇರುತ್ತದೆ. ಆದರೆ ಮೀನುಗಾರರು ಈ ದಿನಗಳಲ್ಲಿ ಕಡಲಿಗೆ ಇಳಿಯದಂತೆ ಎಚ್ಚರಿಕೆಯನ್ನು ಇಲಾಖೆ ನೀಡಿದೆ. 

ಇದರಿಂದಾಗಿ ಸಮುದ್ರದ ಅಲೆಗಳು ಜಾಸ್ತಿ ಇರುವ ಸಂಭವನೀಯತೆಯೂ ಇದ್ದು, ಸಮುದ್ರವಿಹಾರಿಗಳು ಸಂಚರಿಸದೇ ಇರುವುದು ಒಳಿತು. ವೇಗವಾದ ಅಲೆಗಳು ಅಪ್ಪಳಿಸುವ ಸಾಧ್ಯತೆಯನ್ನು ಇಲಾಖೆ ನೀಡಿದೆ.

ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ, ಮಲ್ಪೆ, ಮುರುಡೇಶ್ವರ, ಕುಮಟಾ, ತದಡಿ, ಬೇಲಕೇರಿ (ಆವರ್ಸಾ)ದಲ್ಲಿರುವ ಬಂದರು ಪ್ರದೇಶಗಳಿಗೂ ಈಗಾಗೇ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಗಿದೆ. 

 

(ಹವಾಮಾನ ಇಲಾಖೆ ಟ್ವಿಟರ್ ಸಂದೇಶ

 

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ