
CM ಮೂಡುಬಿದಿರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ, ಎಕ್ಸೆಲೆಂಟ್ ನ ದಶಮಾನೋತ್ಸವ ಉದ್ಘಾಟನೆ
ಅವರು ಏ.27ರ ಬುಧವಾರ ಎಕ್ಸೆಲೆಂಟ್ ಸಂಸ್ಥೆಯವರು ಮೂಡಬಿದಿರೆಯಲ್ಲಿ ನೂತನವಾಗಿ ನಿರ್ಮಿಸಿರುವ ಭೋಜನಾಲಯ ಹಾಗೂ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಮ್ಮೆ ವಿದ್ಯಾರ್ಥಿಯಾದರೆ ಸಾಯುವವರೆಗೂ
ವಿದ್ಯಾರ್ಥಿಗಳೇ. ನಿರಂತರವಾಗಿ ಕಲಿಯಬೇಕು. ಶಾಲೆಗಳಲ್ಲಿ ಮೊದಲು ಪಾಠ ನಂತರ ಪರೀಕ್ಷೆ
ಇದ್ದರೆ, ಬದುಕಿನಲ್ಲಿ ಪಾಠ, ವೇಳಾಪಟ್ಟಿ, ಪಠ್ಯಕ್ರಮವಿರುವುದಿಲ್ಲ. ಜೀವನದ
ಪರೀಕ್ಷೆಗಳಿಂದ ಪಾಠ ಕಲಿಯಲು ಸಿದ್ದರಾಗಬೇಕು. ಯಾಕೆ, ಏನು, ಎಲ್ಲಿ ಎನ್ನುವ ಪ್ರಶ್ನೆಗಳು
ತಾರ್ಕಿಕವಾಗಿ ಚಿಂತಿಸುವ ಶಕ್ತಿ ಬೆಳೆಸುತ್ತದೆ. ಪ್ರಶ್ನೆಗಳನ್ನು ಹಾಕಿಕೊಂಡು
ಜ್ಞಾನಾರ್ಜನೆ ಮಾಡಬೇಕು ಎಂದರು. ಜ್ಞಾನದ ಯುಗದಲ್ಲಿ ಉತ್ತಮವಾಗಿ ಜ್ಞಾನ ಪಡೆದು
ಯಶಸ್ವಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಎಕ್ಸೆಲೆಂಟ್
ಸಂಸ್ಥೆಯನ್ನು ನೋಡಿ ಬೆರಗಾಗಿದ್ದೇನೆ. ಗುರುಕುಲವನ್ನು ಇಷ್ಟು ಅಂದವಾಗಿ
ನಿರ್ಮಿಸಿರುವುದು ಅತ್ಯಂತ ದೊಡ್ಡ ಸಾಧನೆ. ಗುರುವಾಗಿ ಕೆಲವು ವಿದ್ಯಾರ್ಥಿಗಳಿಗೆ
ವಿದ್ಯಾರ್ಜನೆ ಮಾಡಿಸುವ ಧ್ಯೇಯದಿಂದ ಉತ್ತಮ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದರು.
ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾವೀರರ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವುದು ಸಂತೋಷದ ಸಂಗತಿ ಎಂದರು.