![Bantwal: ಟಿ. ಜಿ. ಮುಡೂರು ಅವರಿಗೆ ಜಿಲ್ಲಾ ಕಸಾಪ ನುಡಿನಮನ Bantwal: ಟಿ. ಜಿ. ಮುಡೂರು ಅವರಿಗೆ ಜಿಲ್ಲಾ ಕಸಾಪ ನುಡಿನಮನ](https://blogger.googleusercontent.com/img/b/R29vZ2xl/AVvXsEi1G5ysOaqZ0_zWEURlgkFVcyMHWGYLkOmqweYzRaYuQfhh7ZvWW1QlbJhjv41YdkqVY_hJAnzZaRq9VE8m6P4Q44tGE-YWC3-1QZkJhbQkuPr3CxbSMzf5Vx49NA_nj1F8xqzFGwdHomgpI4xXJ76LOT20C03tNc1ItslOCvVbj5G0wkzjPHtbj1K_/w640-h272/MUDOOR.jpg)
Bantwal: ಟಿ. ಜಿ. ಮುಡೂರು ಅವರಿಗೆ ಜಿಲ್ಲಾ ಕಸಾಪ ನುಡಿನಮನ
Tuesday, May 3, 2022
ಮಂಗಳೂರು: ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಟಿ ಜಿ( ತಮ್ಮಯ್ಯ ಗೌಡ) ಮುಡೂರು ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಬಂಟ್ವಾಳದ ಕನ್ನಡ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ ಎ ಶ್ರೀನಾಥ್ ಪ್ರಸ್ತಾವನೆಗೈದರು. ಸುಳ್ಯ ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ನುಡಿನಮನ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ರಾಜೇಶ್ವರಿ, ಜಿಲ್ಲಾ ಕೋಶಾಧಿಕಾರಿ ಐತಪ್ಪ ನಾಯ್ಕ ಪುತ್ತೂರು, ಜಿಲ್ಲಾ ಸಮಿತಿ ಸದಸ್ಯ ಪೂವಪ್ಪ ನೇರಳಕಟ್ಟೆ,
ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಉಮೇಶ್ ನಾಯಕ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಮೃತರ ಆತ್ಮಕ್ಕೆ ಸದ್ಗತಿ ಕೋರಿ ಮೌನ ಪ್ರಾರ್ಥನೆ ಹಾಗೂ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಡಾ ಎ. ಶ್ರೀನಾಥ್ ಅಧ್ಯಕ್ಷತೆಯಲ್ಲಿ ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ನಡೆಯಿತು